ಚಾರ್ ಧಾಮ್ ( ಸಂಸ್ಕ್ರುತ: ಚತುರ್ಧಾಮ) ಭಾರತದ ನಾಲ್ಕು ಯಾತ್ರಾ ಸ್ಥಳಗಳಾಗಿವೆ. ಈ ಸ್ಥಳಗಳಿಗೆ ಭೇಟಿ ನೀಡುವುದರಿಂದ ಮೋಕ್ಷ ಸಾಧಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ನಾಲ್ಕು ಧಾಮಗಳೆಂದರೆ ಬದರಿನಾಥ, ದ್ವಾರಕಾ, ಜಗನ್ನಾಥ ಮತ್ತು ರಾಮೇಶ್ವರಂ . ಪ್ರತಿಯೊಬ್ಬ ಹಿಂದೂ ತನ್ನ ಜೀವಿತಾವಧಿಯಲ್ಲಿ ಚಾರ್ ಧಾಮ್‌ಗಳಿಗೆ ಭೇಟಿ ನೀಡಬೇಕು ಎಂದು ನಂಬಲಾಗಿದೆ. ಆದಿ ಶಂಕರರು (686–717 ) ವ್ಯಾಖ್ಯಾನಿಸಿದ ಚಾರ್ ಧಾಮ್ ನಾಲ್ಕು ಹಿಂದೂ ತೀರ್ಥಯಾತ್ರಾ ಸ್ಥಳಗಳನ್ನು ಒಳಗೊಂಡಿದೆ. ಈ ಸ್ಥಳಗಳು ಭಾರತದ ವಿಭಿನ್ನ ದಿಕ್ಕುಗಳಲ್ಲಿ ಬರುತ್ತವೆ, ಕ್ರಮವಾಗಿ ಉತ್ತರಾಖಂಡ, ಗುಜರಾತ್, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಲ್ಲಿವೆ.